ಗ್ರಾಮದ ನಾಲ್ಕು ಕಡೆ ಕಾಡಾನೆಗಳು ದಾಳಿ ಮಾಡಿದ್ದು, ಗ್ರಾಮದ ಕೃಷ್ಣ ಬಿನ್ ತಿಮ್ಮೇಗೌಡ, ಜವರೇಗೌಡ ಬಿನ್ ಕುಳ್ಳೇಗೌಡ, ಸುಂದ್ರಮ್ಮ ಕೋಂ ಶಿವಣ್ಣ, ಬೋರೇಗೌಡ ಬಿನ್ ಲಿಂಗೇಗೌಡ, ಸಿದ್ದಪ್ಪ ಮರೀಗೌಡ, ಶಿವಲಿಂಗೇಗೌಡ ಬಿನ್ ಕೊಣೇಗೌಡ, ಹೊನ್ನಮ್ಮ ಕೋಂ ಹೊನ್ನಯ್ಯ ಎಂಬುವವರಿಗೆ ಸೇರಿದ ಜಮೀನುಗಳಿಗೆ ಬುಧವಾರ ರಾತ್ರಿ ಆನೆಗಳು ನುಗ್ಗಿ ರಾಗಿ ಬೆಳೆಯನ್ನು ತಿಂದು, ತುಳಿದು ಹಾಕಿವೆ.