‘ಎಚ್.ಡಿ.ದೇವೇಗೌಡ ಅವರು ಸಂಸತ್ತಿಗೆ ಸ್ಪರ್ಧಿಸಿದ್ದ ವೇಳೆ ಮತ ಕೇಳಲು ಈ ಗ್ರಾಮಕ್ಕೆ ಬಂದಿದ್ದೆ. ಆದರೆ, ಈಗ ದೇವೇಗೌಡರು, ನಾವು ಜೊತೆಯಾಗಿಲ್ಲ. ಕಳೆದ ಬಾರಿ ಬಿಟ್ಟರೆ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿರುವ ಮಳವಳ್ಳಿ ಜನತೆಗೆ ಚಿರಋಣಿ. ಸುಮಲತಾ ಗೆದ್ದಾಗ ಮಾತ್ರ ಇಲ್ಲಿನ ಜನ ನನ್ನ ಮಾತು ಕೇಳಲಿಲ್ಲ. ಹೆಲಿಕಾಪ್ಟರ್ ನೋಡಲು ಒಂದಷ್ಟು ಜನ ಬಿಟ್ಟರೆ ನೂರಾರು ಜನರೂ ಇರಲಿಲ್ಲ. ಜನ ಸೇರಲಿ ಎಂದು ಮುಖಂಡರೊಬ್ಬರ ಮನೆಯಲ್ಲಿ ಕಾದರೂ ಜನ ಬರಲಿಲ್ಲ’ ಎಂದರು.