‘ಶನಿವಾರ ಸಂಜೆಯ ವೇಳೆಗೆ ಒಂದು ಲಕ್ಷ ಕ್ಯುಸೆಕ್ ನೀರು ಹೊರಕ್ಕೆ ಹರಿಸಲಾಗುವುದು. 1.5 ಲಕ್ಷ ಕ್ಯುಸೆಕ್ವರೆಗೆ ನೀರು ಹರಿಸಿದರೂ ನದಿ ತಟದ ಹಳ್ಳಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ನದಿ ಪಾತ್ರದ ಹೊಲ, ಗದ್ದೆಗಳು ಮಾತ್ರ ಮುಳುಗುತ್ತವೆ. ಜನವಸತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೂ ಜನರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದರು.