<p><strong>ಮಂಡ್ಯ: </strong>ಗೋದಾಮು ಬಾಡಿಗೆ, ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪುತ್ರಿ, ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರಿ ಸಿಇಒ ನಿಶಾ ಯೋಗೀಶ್ವರ್ ವಿರುದ್ಧ ಕ್ರಮ ಕೈಗೊಳ್ಳಲು ಮದ್ದೂರು ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ನಿರ್ಧರಿಸಿದೆ.</p>.<p>2018, ಏಪ್ರಿಲ್ನಿಂದ ಇಲ್ಲಿಯವರೆಗೆ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರಿ ಗೋದಾಮು ಬಾಡಿಗೆ, ಖಾಲಿ ಆವರಣದ ನೆಲಬಾಡಿಗೆ ಪಾವತಿಸದೆ ವಂಚಿಸಿದೆ. ಸೆಪ್ಟೆಂಬರ್ ಅಂತ್ಯದವರೆಗೆ ₹ 36 ಲಕ್ಷ ಬಾಡಿಗೆ, ಶೇ 18 ಜಿಎಸ್ಟಿ ಸೇರಿ ₹ 42 ಲಕ್ಷ ಹಣ ಬರಬೇಕಾಗಿದೆ. ಖಾಲಿ ಜಾಗದ ನೆಲ ಬಾಡಿಗೆ ₹ 1.9 ಲಕ್ಷ ಬಾಕಿ ಇದೆ. ಜೊತೆಗೆ ಪುರಸಭೆಯ ಕಂದಾಯ, ತೆರಿಗೆ ಸೇರಿ ಒಟ್ಟು ₹ 5 ಲಕ್ಷ ಬರಬೇಕಾದಿದೆ.</p>.<p>ಕಂಪನಿಯ ಸಿಇಒ ನಿಶಾ ಅವರಿಗೆ ಹಲವು ಬಾರಿ ನೋಟಿಸ್ ನೀಡಿದರೂ ಬಾಡಿಗೆ ಹಾಗೂ ತೆರಿಗೆ ಹಣ ಪಾವತಿಸಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಕುರಿತು ಎಂದು ಸೆ.25ರಂದು ನಡೆದ ಟಿಎಪಿಸಿಎಂಎಸ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.</p>.<p>‘ಗೋದಾಮು ಬಾಡಿಗೆ ಪಡೆಯುವಾಗ ₹ 20 ಲಕ್ಷ ಮಂಗಡ ಪಾವತಿಸಿದ್ದರು. ನಂತರ ಇಲ್ಲಿಯವರೆಗೂ ಯಾವುದೇ ಹಣ ಪಾವತಿಸಿಲ್ಲ. ಜೊತೆಗೆ ಗೋದಾಮು ಕಟ್ಟಡವನ್ನು ತೀವ್ರವಾಗಿ ಹಾನಿಗೊಳಿಸಿದ್ದಾರೆ, ಕರಾರು ಉಲ್ಲಂಘಿಸಿದ್ದಾರೆ. ಇದೆಲ್ಲದರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಘವ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ: </strong>ಗೋದಾಮು ಬಾಡಿಗೆ, ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪುತ್ರಿ, ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರಿ ಸಿಇಒ ನಿಶಾ ಯೋಗೀಶ್ವರ್ ವಿರುದ್ಧ ಕ್ರಮ ಕೈಗೊಳ್ಳಲು ಮದ್ದೂರು ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ನಿರ್ಧರಿಸಿದೆ.</p>.<p>2018, ಏಪ್ರಿಲ್ನಿಂದ ಇಲ್ಲಿಯವರೆಗೆ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರಿ ಗೋದಾಮು ಬಾಡಿಗೆ, ಖಾಲಿ ಆವರಣದ ನೆಲಬಾಡಿಗೆ ಪಾವತಿಸದೆ ವಂಚಿಸಿದೆ. ಸೆಪ್ಟೆಂಬರ್ ಅಂತ್ಯದವರೆಗೆ ₹ 36 ಲಕ್ಷ ಬಾಡಿಗೆ, ಶೇ 18 ಜಿಎಸ್ಟಿ ಸೇರಿ ₹ 42 ಲಕ್ಷ ಹಣ ಬರಬೇಕಾಗಿದೆ. ಖಾಲಿ ಜಾಗದ ನೆಲ ಬಾಡಿಗೆ ₹ 1.9 ಲಕ್ಷ ಬಾಕಿ ಇದೆ. ಜೊತೆಗೆ ಪುರಸಭೆಯ ಕಂದಾಯ, ತೆರಿಗೆ ಸೇರಿ ಒಟ್ಟು ₹ 5 ಲಕ್ಷ ಬರಬೇಕಾದಿದೆ.</p>.<p>ಕಂಪನಿಯ ಸಿಇಒ ನಿಶಾ ಅವರಿಗೆ ಹಲವು ಬಾರಿ ನೋಟಿಸ್ ನೀಡಿದರೂ ಬಾಡಿಗೆ ಹಾಗೂ ತೆರಿಗೆ ಹಣ ಪಾವತಿಸಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಕುರಿತು ಎಂದು ಸೆ.25ರಂದು ನಡೆದ ಟಿಎಪಿಸಿಎಂಎಸ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.</p>.<p>‘ಗೋದಾಮು ಬಾಡಿಗೆ ಪಡೆಯುವಾಗ ₹ 20 ಲಕ್ಷ ಮಂಗಡ ಪಾವತಿಸಿದ್ದರು. ನಂತರ ಇಲ್ಲಿಯವರೆಗೂ ಯಾವುದೇ ಹಣ ಪಾವತಿಸಿಲ್ಲ. ಜೊತೆಗೆ ಗೋದಾಮು ಕಟ್ಟಡವನ್ನು ತೀವ್ರವಾಗಿ ಹಾನಿಗೊಳಿಸಿದ್ದಾರೆ, ಕರಾರು ಉಲ್ಲಂಘಿಸಿದ್ದಾರೆ. ಇದೆಲ್ಲದರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಘವ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>