ಕೆ.ಆರ್.ಪೇಟೆ: ಪಟ್ಟಣದಲ್ಲಿ ನಿಷೇಧಾಜ್ಞೆ ಇದ್ದರೂ ಹೇಮಾವತಿ ಬಡಾವಣೆಯ ಗ್ರಾಮಭಾರತಿ ವಿದ್ಯಾಸಂಸ್ಥೆಯ ಮುಂದೆ ನಿಂತು ಧೂಮಪಾನ ಮಾಡುತ್ತಿದ್ದ ಐವರು ಯುವಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪತಹಶೀಲ್ದಾರ್ ಲಕ್ಷ್ಮೀಕಾಂತ್ ನೀಡಿದ ದೂರಿನ ಮೇರೆಗೆ ಪಟ್ಟಣ ಠಾಣೆಯ ಎಸ್.ಐ ಬ್ಯಾಟರಾಯೀಗೌಡ ಅವರು ನಿಖಿಲ್ (23), ಜಯಂತ್ ( 21), ಪದ್ಮನಾಭ್ (42) ಶ್ಯಾಮಸುಂದರ್ (33) ಹಾಗೂ ಅಭಿಷೇಕ್ (25) ವಿರುದ್ಧ ದೂರು ದಾಖಲಿಸಿದ್ದಾರೆ.