ಜನರ ಪರದಾಟ ಕಂಡು ಅಧಿಕಾರಿಗಳು ಹಾಗೂ ಹಿಂದಿನ ಶಾಸಕರ ಗಮನಕ್ಕೆ ಹತ್ತಾರು ಬಾರಿ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನರ ತೆರಿಗೆ ಹಣ ಸರ್ಕಾರ ಖರ್ಚು ಮಾಡಿ , ಸಾರ್ವಜನಿಕರ ಉಪಯೋಗಕ್ಕೆಲಭ್ಯವಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗಮನ ಹರಿಸಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಿ ಜನರಿಗೆ ನೀರು ಕೊಡಿಸಲಿ ಎಂದು ಗ್ರಾಮದ ಮಂಜೇಶ್ ಒತ್ತಾಯಿಸಿದ್ದಾರೆ.