ಕೆ.ಆರ್.ಪೇಟೆ: ತಾಲ್ಲೂಕಿನ ಮಕ್ಕಳ ಸಾಹಿತಿ ಮತ್ತು ಶಿಕ್ಷಕ ಮಾರೇನಹಳ್ಳಿ ಲೋಕೇಶ್ ಅವರಿಗೆ ರಾಜ್ಯ ಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಮೈಸೂರಿನ ಶರಣು ವಿಶ್ವ ವಚನ ಫೌಂಡೇಷನ್ ವತಿಯಿಂದ ಈ ಪ್ರಶಸ್ತಿ ನೀಡುತಿದ್ದು ಸಾಹಿತ್ಯ, ಶಿಕ್ಷಣ ಮತ್ತು ವಚನ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅನುಪಮ ಸಾಧನೆಯನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮೈಸೂರಿನಲ್ಲಿ ಡಿ.25 ರ ಸೋಮವಾರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.