ನಾರಾಯಣಗೌಡರು ಲಕ್ಷ್ಮಿಜನಾರ್ಧನ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ‘ಮುಂದಿನ ಬಾರಿಯೂ ಸಚಿವರಾಗುವಂತೆ ಆಶೀರ್ವಾದ ಮಾಡಿ ಪೂಜೆ ಸಲ್ಲಿಸಿ’ ಎಂದು ಅರ್ಚಕರನ್ನು ಕೋರಿದರು. ಜಿಲ್ಲಾಧಿಕಾರಿ ಕೋರಿಕೆಯಂತೆ ಅರ್ಚಕರು, ಆರೋಗ್ಯ, ಅತ್ಯುನ್ನತ ಪದವಿ ದೊರೆಯಲಿ ಎಂದು ಆಶೀರ್ವದಿಸಿದರು.