ಶಿಕ್ಷಕರ ಅಳಲು: ಮೃತ ಚಂದನ್, ಕಾರ್ತೀಕ್ ಪಾಂಡವಪುರ ಪಟ್ಟಣದ ನಿರ್ಮಲಾ ಕಾನ್ವೆಂಟ್ನಲ್ಲಿ ಓದುತ್ತಿದ್ದರು. ‘ಚಂದನ್, ಕಾರ್ತೀಕ್ ಒಳ್ಳೆಯ ಮಕ್ಕಳು. ಚಂದನ್ ಬುದ್ಧಿವಂತ, ಚುರುಕು, ಕ್ರಿಯಾಶೀಲನಾಗಿದ್ದ. ಅವರನ್ನು ನೆನೆದು ದು:ಖಪಡುತ್ತಿದ್ದೇವೆ. ಚಂದನ್ ತರಗತಿಯಲ್ಲಿ ಮೊದಲ ಬೆಂಚ್ನಲ್ಲಿಯೇ ಕುಳಿತುಕೊಳ್ಳುತ್ತಿದ್ದ. ಪಾಠ ಹೇಗೆ ಮಾಡಲಿ. ತುಂಬ ಸಂಕಟವಾಗುತ್ತದೆ’ ಎಂದು ಶಿಕ್ಷಕರಾದ ಸಿಸ್ಟರ್ ಮೇರಿ ಸೆಲಿನಾ, ಜಾನಕಿ, ಧರಣೇಶ್ ನೋವಿನಿಂದ ಹೇಳುತ್ತಾರೆ.