ಭಾರತೀನಗರ: ಸಮೀಪದ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ಶುಕ್ರವಾರ ಅಸ್ವಸ್ಥಗೊಂಡು ಮರದಿಂದ ಕೆಳಗೆ ಬಿದ್ದಿದ್ದ ಪೆಲಿಕಾನ್ ಶನಿವಾರ ಮೃತಪಟ್ಟಿದೆ.
ಇದರಿಂದ ಈ ವರ್ಷದಲ್ಲಿ ಮೃತಪಟ್ಟ ಪೆಲಿಕಾನ್ಗಳ ಸಂಖ್ಯೆ 5ಕ್ಕೇರಿದೆ. ಮದ್ದೂರು ಪಟ್ಟಣದ ಶಿವಪುರ ಪಶು ಆಸ್ಪತ್ರೆಯಲ್ಲಿ ಪಶುವೈದ್ಯರು ಪೆಲಿಕಾನ್ನ ಮರಣೋತ್ತರ ಪರೀಕ್ಷೆ ನಡೆಸಿದರು. ಆನಂತರ ಕಳೇಬರವನ್ನು ಸುಡಲಾಯಿತು.