ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ಶನಿವಾರ ಸರ್ಕಾರದ ವಿವಿಧ ಯೋಜನೆ ಫಲಾನುಭವಿಗಳ ಸಮಾವೇಶಕ್ಕೂ ಮುಂಚೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾವಿರಾರು ಮಿನಿ ಕಟೌಟ್ ಗಳನ್ನು ಸಭಿಕರ ಸಾಲಿನ ಖಾಲಿ ಖುರ್ಚಿಗಳಲ್ಲಿ ಜೋಡಿಸಿಡಲಾಗಿತ್ತು.
ಸಮಾವೇಶ ಶುರುವಾಗುವ ಮುಂಚೆ ಈ ಇಬ್ಬರು ಪ್ರಮುಖರ ಮುಖಚಿತ್ರವುಳ್ಳ ಕಟೌಟ್ ಗಳನ್ನು ಖಾಲಿ ಕುರ್ಚಿಗಳಲ್ಲಿ ನೋಡಿ ಹಲವರು ಅಚ್ಚರಿ ಪಟ್ಟರು.