ಮಂಡ್ಯ; ಬೆಂಗಳೂರು-ಮೈಸೂರು ದಶಪಥ ಉದ್ಘಾಟನೆ ಮತ್ತು ಪ್ರಧಾನಿ ರೋಡ್ ಶೋ ಸಲುವಾಗಿ ನಿರ್ಮಿಸಲಾಗಿದ್ದ ಮಹಾದ್ವಾರಗಳ ಪೈಕಿ ಉರಿಗೌಡ-ನಂಜೇಗೌಡ ಮಹಾದ್ವಾರವನ್ನು ಶನಿವಾರ ರಾತ್ರೋರಾತ್ರಿ ತೆರವುಗೊಳಿಸಲಾಗಿದೆ.
ಆ ಸ್ಥಳದಲ್ಲಿ, ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ ವನ್ನು ನಿಲ್ಲಿಸಲಾಗಿದೆ.
ಉರಿಗೌಡ- ನಂಜೇಗೌಡ ಮಹಾದ್ವಾರದ ಕುರಿತು ತೀವ್ರ ಟೀಕೆ ವ್ಯಕ್ತವಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲೂ ಆಕ್ರೋಶ ಅಸಮಾಧಾನ ಗಮನ ಸೆಳೆದಿತ್ತು.
ಈ ಹಿನ್ನೆಲೆಯಲ್ಲಿ ಮಹಾದ್ವಾರದ ಹೆಸರನ್ನು ಬದಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.