ನಾಗಮಂಗಲ: ಇಲ್ಲಿನ ಮೈಸೂರು ರಸ್ತೆಯ ರಹಮತ್ ನಗರದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 40 ಗ್ರಾಂ ಗಾಂಜಾ ಸೊಪ್ಪು ಹಾಗೂ 55 ಗ್ರಾಂ ಗಾಂಜಾ ಗಿಡದ ಬೀಜಗಳನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಹಳೆಯ ಸೋಪಾ ಕೆಳಗೆ ಬಚ್ಚಿಟ್ಟಿದ್ದ ಗಾಂಜಾ ಸೊಪ್ಪು ಹಾಗೂ ಬೀಜಗಳನ್ನು ವಶಪಡಿಸಿಕೊಂಡರು.
‘ಆರೋಪಿ ಇಮ್ರಾಜ್ ಖಾನ್ (30) ತಲೆಮರೆಸಿಕೊಂಡಿದ್ದಾನೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ದಾಳಿಯ ವೇಳೆ ಅಬಕಾರಿ ನಿರೀಕ್ಷಕ ಜ್ಞಾನಪ್ರಕಾಶ್, ಸಿಬ್ಬಂದಿಗಳಾದ ಸುನಿಲ್ ಕುಮಾರ್, ಸಂತೋಷ್, ಬಿ.ಶಿವಣ್ಣ, ಪ್ರಮೋದ್, ಮಹದೇವ್, ಶಶಿಧರ್ ಮತ್ತು ದೇವರಾಜು ಇದ್ದರು.