ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಜಮೀರ್ ಅಹಮದ್ ಚುನಾವಣಾ ಪ್ರಚಾರಕ್ಕೆ ಚಿತ್ರನಟರನ್ನು ಕರೆಸುತ್ತಾರೆ. ಡ್ರಗ್ಸ್ ಜಾಲದಲ್ಲಿ ಅವರು ಮೊದಲಿನಿಂದಲೂ ಇದ್ದಾರೆ. ಬಂಧನ ಮಾಡಲು ಇದೊಂದು ಒಳ್ಳೆಯ ಅವಕಾಶವಾಗಿದೆ. ಪಾದರಾಯನಪುರ, ಡಿ.ಜೆ.ಹಳ್ಳಿಯಲ್ಲಿ ನಡೆದ ಪ್ರಕರಣಕ್ಕೂ ಡ್ರಗ್ಸ್ ಕಾರಣವಾಗಿದೆ. ಇದರ ಹಿಂದೆ ದಾವೂದ್ ಇಬ್ರಾಹಿಂ ಇದ್ದಾನೆ’ ಎಂದು ಆರೋಪಿಸಿದರು.