ತಂತ್ರಾಂಶ ಅಳವಡಿಕೆ ಸಮರ್ಪಕವಾಗಿ ಆಗಿಲ್ಲ. ಆಸ್ತಿ ವಿವರ ತಿದ್ದುಪಡಿಗೆ ಆಗುತ್ತಿಲ್ಲ, ಆನ್ಲೈನ್ ಪಾವತಿಯಲ್ಲೂ ತೊಂದರೆ ಇದೆ. ಮುಂದ್ರಾಂಕ ಶುಲ್ಕ, ನೋಂದಣಿ ಶುಲ್ಕ ಪಾವತಿ ನಂತರ ಯಾವ ಸಮಯದಲ್ಲಿ ನೋಂದಣಿಗೆ ಹಾಜರಾಗಬೇಕು ಎಂಬ ಮಾಹಿತಿ ಸಿಗುತ್ತಿಲ್ಲ. ಕಚೇರಿಯಲ್ಲೂ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.