ಕಳೆದ 6–7 ವರ್ಷಗಳ ಹಿಂದೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಎಚ್.ಪಿ.ಸೋಮಶೇಖರ್ ಹಾರೋಹಳ್ಳಿ ನೇತೃತ್ವದಲ್ಲಿ 60ಕ್ಕೂ ಹೆಚ್ಚು ವಿವಿಧ ಬಗೆಯ ಸಸಿಗಳನ್ನು ನೆಟ್ಟಿದ್ದರು. ಆ ಸಸಿಗಳಿಗೆ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಕುವೆಂಪು ಸೇರಿದಂತೆ ಸಾಹಿತಿ, ಚಿಂತಕರ ಹೆಸರನ್ನು ಇಟ್ಟು ಎರಡು ವರ್ಷಗಳು ನೀರೆರೆದು ಪೋಷಿಸಿದ್ದರು.