ಧ್ವನಿ ಮತ್ತು ಬೆಳಕು ಯೋಜನೆಯ ಸ್ಥಳದ ಪಕ್ಕದಲ್ಲೇ ಈ ಅವ್ಯವಸ್ಥೆ ಇದೆ. ಪಟ್ಟಣ ಪ್ರವೇಶಿಸುವವರಿಗೆ ಈ ಸಗಣಿ ಗುಡ್ಡೆಗಳ ದರ್ಶನವಾಗುತ್ತದೆ. ಮಳೆ ಸುರಿದರೆ ಈ ಗುಡ್ಡೆಗಳಿಂದ ಗಬ್ಬು ವಾಸನೆ ಮೂಗಿಗೆ ಬಡಿಯುತ್ತದೆ. ನಾಯಿಗಳು, ಹಂದಿಗಳು ಆಗಾಗ ಈ ತಿಪ್ಪೆಗಳನ್ನು ಕೆದಕಿ ಮತ್ತಷ್ಟು ಅವ್ಯವಸ್ಥೆ ಸೃಷ್ಟಿಸುತ್ತವೆ. ಕೋಟೆ, ಕಂದಕಗಳಲ್ಲಿ ಮರ ಗಿಡಗಳು ಹಬ್ಬಿ ನಿಂತು ಕೋಟೆಯನ್ನೇ ಮರೆ ಮಾಡುತ್ತಿರುವದು ಒಂದೆಡೆಯಾದರೆ, ಅಳಿದುಳಿದ ಕೋಟೆ ಸ್ಥಳ ತಿಪ್ಪು ಗುಂಡಿಯಾಗಿ ಮಾರ್ಪಡುತ್ತಿರುವುದು ಐತಿಹಾಸಿಕ ಪಟ್ಟಣದ ಒಟ್ಟಂದಕ್ಕೆ ಕಳಂಕವಾಗಿದೆ.