ಕ್ಷೇತ್ರದ ಜನತೆ ಸುಮಾರು 70,897 ಮತಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಅದಕ್ಕಾಗಿ ಮತದಾರರಿಗೆ ಆಭಾರಿಯಾಗಿ ದ್ದೇನೆ ಎಂದರು. ತಮ್ಮ ಸೋಲಿನ ಬಗ್ಗೆ ವ್ಯಾಖ್ಯಾನಿಸಿದ ಅವರು ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಇದ್ದಿತ್ತಾದರೂ ಕುಮಾರಸ್ವಾಮಿಯವರ ಮೇಲಿನ ಪ್ರೀತಿಯಿಂದ ಇಡೀ ಜಿಲ್ಲೆಯ ಜನ ಚುನಾವಣೆಯಲ್ಲಿ ಜೆಡಿಎಸ್ ಹೊರತುಪಡಿಸಿ ಕಣದಲ್ಲಿ ನಿಂತಿದ್ದ ಯಾವೊಬ್ಬ ಅಭ್ಯರ್ಥಿಗಳ ಬಗ್ಗೆ ಕಣ್ಣೆತ್ತಿಯೂ ನೋಡದೆ ಪರಾಜಯ ಗೊಳಿಸಿದ್ದಾರೆ. ಅದಕ್ಕೆ ನಾನೂ ಬಲಿಪಶು ವಾಗಿದ್ದೇನೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಆದಿಹಳ್ಳಿ ರಮೇಶ್ ಇದ್ದರು.