ಜೆಡಿಯು ಮುಖಂಡ ಮಹಿಮಾ ಜೆ. ಪಟೇಲ್ ಮಾತನಾಡಿ, ರಾಜ್ಯ ಹಾಗೂ ದೇಶಕ್ಕೆ ದೊಡ್ಡ ಕಂಟಕವಿದೆ. ರಾಜಕಾರಣದಲ್ಲಿ ಸ್ಪಷ್ಟತೆ ಇಲ್ಲ. ಜನರಿಗೆ ಏನು ಬೇಕು ಎಂಬ ಅರಿವು ನಮ್ಮನ್ನಾಳು ತ್ತಿರುವ ಪಕ್ಷಗಳಿಗೆ ಇಲ್ಲ. ಅಧಿಕಾರಕ್ಕೆ ತರಲು ವಾಮಮಾರ್ಗ ಅನುಸರಿಸಿ ಆ ಮೂಲಕ ಹಣ ಗಳಿಸುವ ಕೆಲಸದಲ್ಲಿ ತೊಡಗಿಕೊಂಡಿವೆ ಎಂದು ಟೀಕಿಸಿದರು.
ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ನಾಡಗೌಡ ಮಾತನಾಡಿ, ನಿಷ್ಠಾವಂತರು ರಾಜಕೀಯಕ್ಕೆ ಬರಬೇಕು ಕಾಂಗ್ರೆಸ್, ಬಿಜೆಪಿ ಮೇಲೆ ಜನರಿಗೆ ನಂಬಿಕೆ ಹೋಗುತ್ತಿದೆ. ಜನಸಾಮನ್ಯರ ಸಮಸ್ಯೆಗೆ ಸ್ಪಂದಿಸುವ ಪಕ್ಷಗಳಿಗೆ ಮತದಾರರು ಮಣೆ ಹಾಕಲಿದ್ದಾರೆ ಎಂದು ಹೇಳಿದರು.