ರೈತರು ಬೆಳೆಯುವ ಕಬ್ಬಿನಿಂದ ಎಥೆನಾಲ್ ತೆಗೆದು ಇಂಧನವಾಗಿ ಬಳಕೆ ಮಾಡಬೇಕು. ರೈತರು ಬೆಳೆದ ಕಬ್ಬಿಗೆ ದುಪ್ಪಟ್ಟು ದರ ನಿಗದಿ ಮಾಡಬೇಕು. ರೈತರಿಗೆ ವೈಜ್ಞಾನಿಕ ಲಾಭದಾಯಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಗದುಗಿನಲ್ಲಿ ಯಡಿಯೂರಪ್ಪ ಪ್ರವಾಸ ಮಾಡುತ್ತಿದ್ದಾಗ ರೈತರೊಬ್ಬರು ಮಹಾದಾಯಿ ನೀರಿನ ವಿಚಾರ ಪ್ರಸ್ತಾಪಿಸಿದಕ್ಕೆ, ಅವರ ಮೇಲೆ ಬಿಜೆಪಿ ಮಾಜಿ ಸಚಿವ ಕಳಸಪ್ಪ ಬಂಡಿ ಹಲ್ಲೆ ಮಾಡಿರುವುದು ಖಂಡನೀಯ ಎಂದರು.
ಜಿಲ್ಲಾ ಕಾರ್ಯದರ್ಶಿ ಎಂ.ಸಿ.ಮರಿಯಪ್ಪ, ಜಿಲ್ಲಾ ಸಂಚಾಲಕ ಜಯರಾಮು, ಜಿಲ್ಲಾ ಕಾರ್ಯದರ್ಶಿ ನಾಗರಾಜು, ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್, ಕೆ.ಟಿ. ಗಿರೀಶಬಾಬು ಇದ್ದರು.