ಬಿ.ವಿ.ಕಾರಂತ ಅವರು ಅವಾದ್ಯ ಕಛೇರಿಯನ್ನು 31 ವರ್ಷದ ಹಿಂದೆ ನಡೆಸಿದ್ದರು. ಕಲ್ಲು, ಜಾಗಟೆ, ಮಡಕೆ, ಚಿಟಿಕೆ, ಬಿದಿರಿನ ಬೊಂಬು, ತೆಂಗಿನಕಾಯಿ ಚಿಪ್ಪು ಮೊದಲಾದ ವಸ್ತುಗಳನ್ನು ನುಡಿಸುವ ಮೂಲಕ ಹೊಸದೊಂದು ಪ್ರಯೋಗ ಮಾಡಿದ್ದರು. ಈಗ ಮತ್ತೆ ಅದೇ ಸಂಗೀತ
ಕಛೇರಿ ಕೇಳಿ ಬಂದಿತು. ಇದಕ್ಕೂ ಮುನ್ನ ನಡೆದ ಕೋಲಾಟ ಸೂಜಿಗಲ್ಲಿನಂತೆ ಸೆಳೆಯಿತು. ಕಲಾವಿದ ಧನಂಜಯ್ಯ ಮತ್ತು ಸಂಗಡಿಗರು ಹಾಡಿದ ಮಂಕುತಿಮ್ಮನ ಕಗ್ಗವೂ ಬಹುವಾಗೆ ಸೆಳೆಯುವಲ್ಲಿ ಸಫಲವಾಯಿತು.