‘ನಂಜನಗೂಡು ತಾಲ್ಲೂಕಿನ ಮರಳೂರು ಗ್ರಾಮದವರಾದ ಇವರು, ಒಂದು ವರ್ಷದ ಹಿಂದೆ ಸಂಬಂಧಿಯಾದ ಸಿದ್ಧರಾಜು ಅವರನ್ನು ವಿವಾಹವಾಗಿದ್ದರು. ಮೊದಲಿನಿಂದಲೂ ಇವರು ಆಗಾಗ್ಗೆ ದೆವ್ವ ಹಿಡಿದವರಂತೆ ವರ್ತಿಸುತ್ತಿದ್ದರು. ಹೀಗಾಗಿ, ಚಿಕ್ಕಮ್ಮದೇವಿ ಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಮನೆಗೆ ಬಂದ ತಕ್ಷಣ ಇವರು ಸ್ನಾನದ ಕೋಣೆಗೆ ಹೋಗಿ ನೇಣು ಹಾಕಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವಿದ್ಯಾರಣ್ಯಪುರಂ ಠಾಣೆಯಲ್ಲಿ ದಾಖಲಾಗಿದೆ.