2013ರಲ್ಲಿ ಆರಂಭವಾದ ಈ ಪ್ರತಿಷ್ಠಾನವು ಪರಿಸರ ಸಂರಕ್ಷಣೆ, ಪ್ರಾಣಿ, ಪಕ್ಷಿಗಳ ರಕ್ಷಣೆಯಲ್ಲಿ ಸದ್ದಿಲ್ಲದೇ ತೊಡಗಿಕೊಂಡಿದೆ. ಪ್ಲಾಸ್ಟಿಕ್ ದೀಪಗಳನ್ನು ಬಳಸುವುದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಅರಿತು, ಮಣ್ಣಿನ ದೀಪಗಳನ್ನು ನೀಡಲಾಯಿತು. ಈಗ ಸಗಣಿ, ಗೋಮೂತ್ರ ಬಳಸಿ ಹೊಸಬಗೆಯಲ್ಲಿ ದೀಪ ತಯಾರಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ತಯಾರಾದ 5 ಸಾವಿರ ದೀಪಗಳಲ್ಲಿ ಕೇವಲ ನೂರು ಮಾತ್ರವಷ್ಟೇ ಈಗ ಉಳಿದಿದೆ.