ವೀಸಾ ಸಮಸ್ಯೆ ಬಗೆಹರಿದಿದ್ದು, ಗುರುವಾರ ನಸುಕಿನ 1.20ರ ವಿಮಾನದಲ್ಲಿ ಅಭಿಷೇಕ್ ತಂದೆ, ತಾಯಿ ಸೇರಿದಂತೆ ಒಟ್ಟು ಐವರು ಸ್ಯಾನ್ ಬರ್ನಾರ್ಡಿನೊಗೆ ತೆರಳಲಿದ್ದಾರೆ. ಅವರು ಹೋಗುವ ಸಮಯಕ್ಕೆ ಮರಣೋತ್ತರ ಪರೀಕ್ಷೆ ಮುಗಿದು ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಅಣಿಗೊಳಿಸಲಾಗಿರುತ್ತದೆ. ನಂತರ, ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ಹೇಳಿದರು.