ಮೈಸೂರು: ಲಾಕ್ಡೌನ್ ಜಾರಿಗೊಂಡ ದಿನದಿಂದಲೂ ರೋಗಿಗಳು ಆಸ್ಪತ್ರೆಗೆ ಹೋಗಿ ಬರಲು ಸಂಕಷ್ಟ ಎದುರಿಸುತ್ತಿದ್ದು, ಇಂತಹವರ ನೆರವಿಗಾಗಿ ‘ಲೆಟ್ ಅಸ್ ಡೂ ಇಟ್’ ಸ್ವಯಂ ಸೇವಾ ಸಂಸ್ಥೆ, ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ ಎರಡು ಆಂಬುಲೆನ್ಸ್ಗಳ ಸೇವೆಗೆ ಚಾಲನೆ ನೀಡಿತು.
ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಆಂಬ್ಯುಲೆನ್ಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಈ ಆಂಬ್ಯುಲೆನ್ಸ್ಗಳು ಡಯಾಲಿಸಿಸ್ಗಾಗಿ ಆಸ್ಪತ್ರೆಗೆ ಹೋಗುವವರು ಹಾಗೂ ಗರ್ಭಿಣಿಯರಿಗೆ ಉಚಿತ ಸೇವೆ ಒದಗಿಸಲಿವೆ ಎಂದು ಹೇಳಿದರು.
ಅಶಕ್ತ ರೋಗಿಗಳು 0821-4001100 ಸಂಖ್ಯೆಗೆ ಕರೆ ಮಾಡಿ ಸಹಾಯ ಕೇಳಿಕೊಳ್ಳಬಹುದು. ತಕ್ಷಣವೇ ಸಂಬಂಧಿಸಿದ ಸಿಬ್ಬಂದಿ ನಿಮ್ಮ ಮನೆ ಬಳಿಗೆ ಬಂದು ಕರೆದೊಯ್ಯುವರು. ಈ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ರಾಮದಾಸ್ ತಿಳಿಸಿದರು.