<p><strong>ಮೈಸೂರು: </strong>ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವಗುರುವಾರ ಒಂದೆಡೆ ಉದ್ಘಾಟನೆಗೊಳ್ಳುತ್ತಿದ್ದರೆ ಮತ್ತೊಂದೆಡೆ ಚಾಮುಂಡೇಶ್ವರಿ ದೇಗುಲದ ಮುಂಭಾಗವಿರುವ ಮಂಟಪದಲ್ಲಿ ದೇವಿಪದಗಳ ಗಾಯನ ಮನಸೂರೆಗೊಂಡಿತು.</p>.<p>ಲಲಿತ ಪರಮೇಶ್ವರಿ ಭಜನಾ ಮಂಡಳಿಯ ಕಲಾವಿದರು ದೇವಿಪದಗಳ ಗಾಯನವನ್ನು ಸುಮಾರು ಒಂದೂವರೆ ಗಂಟೆಗಳಷ್ಟು ಕಾಲ ಹಾಡಿದರು. ಒಟ್ಟು 20 ಮಂದಿಯ ತಂಡದಲ್ಲಿ 7 ಮಂದಿ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾದರು.</p>.<p>ದೇವಿದೇವಿ ತ್ರಿಪುರ ಸುಂದರಿ, ವಾಣಿ ಪರಮಕಲ್ಯಾಣ, ಸಿಂಹವಾಹಿನಿ ರುಂಡಮಾಲಿನಿ, ಪಾಯಿಮಾಂ ವರದೆ ಜಗದಂಬೆ, ಚಿಂತ್ಯಾಕೆ ಮಾಡುತಿ ಚಿನ್ಮಯನಿದ್ದಾನೆ... ಹೀಗೆ ನಿರರ್ಗಳವಾಗಿ ಹಲವು ಹಾಡುಗಳನ್ನು ಅವರು ಪ್ರಸ್ತುತಪಡಿಸಿದರು.</p>.<p>ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದರಿಂದ ಬೆಟ್ಟದ ಬಹುತೇಕ ಗ್ರಾಮಸ್ಥರು ದೇಗುಲದಲ್ಲಿ ದೇವರ ದರ್ಶನಕ್ಕೆಂದು ಬಂದರು. ಬೇರೆ ದಿನಗಳಾದರೆ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿರುತ್ತಾರೆ ಎಂಬ ಕಾರಣಕ್ಕೆ ಬೆಟ್ಟದಲ್ಲಿರುವ ವ್ಯಾಪಾರಸ್ಥರೂ ದೇವರ ದರ್ಶನ ಪಡೆದರು. ಇವರೆಲ್ಲ ಮಂಟಪದಲ್ಲಿ ನಡೆಯುತ್ತಿದ್ದ ಗಾಯನವನ್ನು ಕೇಳುತ್ತ ಹಲವು ಹೊತ್ತು ನಿಂತರು.</p>.<p>ಗಾಯತ್ರಿದೇವಿ, ಸುವರ್ಣಾ, ಗೀತಾ, ಜಯಲಕ್ಷ್ಮೀ, ಸರಸ್ವತಿ, ರಾಜೇಶ್ವರಿ, ಗುಣಾಂಬ ದೇವಿಗೀತೆಗಳನ್ನು ಹಾಡಿದರು. ನಂತರ, ಗೌರಿಶಂಕರ ಭಜನಾ ಮಂಡಳಿಯವರು ಗಾಯನ ಮುಂದುವರಿಸಿದರು.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲಲಿತ ಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷೆ ಗಾಯತ್ರಿದೇವಿ, ‘ನಾವು ಸುಮಾರು 15 ವರ್ಷಗಳಿಂದ ಭಜನಾ ಮಂಡಳಿಯನ್ನು ರಚಿಸಿಕೊಂಡು ನಿತ್ಯ ಟೀಚರ್ಸ್ ಬಡಾವಣೆಯ ಸುಬ್ರಹ್ಮಣ್ಯೇಶ್ವರ ದೇಗುಲದಲ್ಲಿ ಭಜನೆ ಮಾಡುತ್ತೇವೆ. ಈ ಬಾರಿ ದಸರೆಯ ಮೊದಲ ದಿನ ಚಾಮುಂಡೇಶ್ವರಿ ದೇಗುಲದ ಎದುರಿನ ಮಂಟಪದಲ್ಲಿ ದೇವಿಗೀತೆಗಳನ್ನು ಹಾಡಿದ್ದು, ಸಾರ್ಥಕ ಎನಿಸಿತು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವಗುರುವಾರ ಒಂದೆಡೆ ಉದ್ಘಾಟನೆಗೊಳ್ಳುತ್ತಿದ್ದರೆ ಮತ್ತೊಂದೆಡೆ ಚಾಮುಂಡೇಶ್ವರಿ ದೇಗುಲದ ಮುಂಭಾಗವಿರುವ ಮಂಟಪದಲ್ಲಿ ದೇವಿಪದಗಳ ಗಾಯನ ಮನಸೂರೆಗೊಂಡಿತು.</p>.<p>ಲಲಿತ ಪರಮೇಶ್ವರಿ ಭಜನಾ ಮಂಡಳಿಯ ಕಲಾವಿದರು ದೇವಿಪದಗಳ ಗಾಯನವನ್ನು ಸುಮಾರು ಒಂದೂವರೆ ಗಂಟೆಗಳಷ್ಟು ಕಾಲ ಹಾಡಿದರು. ಒಟ್ಟು 20 ಮಂದಿಯ ತಂಡದಲ್ಲಿ 7 ಮಂದಿ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾದರು.</p>.<p>ದೇವಿದೇವಿ ತ್ರಿಪುರ ಸುಂದರಿ, ವಾಣಿ ಪರಮಕಲ್ಯಾಣ, ಸಿಂಹವಾಹಿನಿ ರುಂಡಮಾಲಿನಿ, ಪಾಯಿಮಾಂ ವರದೆ ಜಗದಂಬೆ, ಚಿಂತ್ಯಾಕೆ ಮಾಡುತಿ ಚಿನ್ಮಯನಿದ್ದಾನೆ... ಹೀಗೆ ನಿರರ್ಗಳವಾಗಿ ಹಲವು ಹಾಡುಗಳನ್ನು ಅವರು ಪ್ರಸ್ತುತಪಡಿಸಿದರು.</p>.<p>ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದರಿಂದ ಬೆಟ್ಟದ ಬಹುತೇಕ ಗ್ರಾಮಸ್ಥರು ದೇಗುಲದಲ್ಲಿ ದೇವರ ದರ್ಶನಕ್ಕೆಂದು ಬಂದರು. ಬೇರೆ ದಿನಗಳಾದರೆ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿರುತ್ತಾರೆ ಎಂಬ ಕಾರಣಕ್ಕೆ ಬೆಟ್ಟದಲ್ಲಿರುವ ವ್ಯಾಪಾರಸ್ಥರೂ ದೇವರ ದರ್ಶನ ಪಡೆದರು. ಇವರೆಲ್ಲ ಮಂಟಪದಲ್ಲಿ ನಡೆಯುತ್ತಿದ್ದ ಗಾಯನವನ್ನು ಕೇಳುತ್ತ ಹಲವು ಹೊತ್ತು ನಿಂತರು.</p>.<p>ಗಾಯತ್ರಿದೇವಿ, ಸುವರ್ಣಾ, ಗೀತಾ, ಜಯಲಕ್ಷ್ಮೀ, ಸರಸ್ವತಿ, ರಾಜೇಶ್ವರಿ, ಗುಣಾಂಬ ದೇವಿಗೀತೆಗಳನ್ನು ಹಾಡಿದರು. ನಂತರ, ಗೌರಿಶಂಕರ ಭಜನಾ ಮಂಡಳಿಯವರು ಗಾಯನ ಮುಂದುವರಿಸಿದರು.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲಲಿತ ಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷೆ ಗಾಯತ್ರಿದೇವಿ, ‘ನಾವು ಸುಮಾರು 15 ವರ್ಷಗಳಿಂದ ಭಜನಾ ಮಂಡಳಿಯನ್ನು ರಚಿಸಿಕೊಂಡು ನಿತ್ಯ ಟೀಚರ್ಸ್ ಬಡಾವಣೆಯ ಸುಬ್ರಹ್ಮಣ್ಯೇಶ್ವರ ದೇಗುಲದಲ್ಲಿ ಭಜನೆ ಮಾಡುತ್ತೇವೆ. ಈ ಬಾರಿ ದಸರೆಯ ಮೊದಲ ದಿನ ಚಾಮುಂಡೇಶ್ವರಿ ದೇಗುಲದ ಎದುರಿನ ಮಂಟಪದಲ್ಲಿ ದೇವಿಗೀತೆಗಳನ್ನು ಹಾಡಿದ್ದು, ಸಾರ್ಥಕ ಎನಿಸಿತು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>