ಜಾತಿ–ಧರ್ಮದ ಬೇಲಿಯಿಲ್ಲ:ಮಹಾಲಯ ಅಮಾವಾಸ್ಯೆ ಬಳಿಕದ ನವಮಿಯ ದಿನ ‘ಆಯುಧ ಪೂಜೆ’ ನಡೆಸುವುದು ಸಂಪ್ರದಾಯ. ಇದು ಶರನ್ನವರಾತ್ರಿಯ ಸಮಾರೋಪಕ್ಕೆ ಮುನ್ನುಡಿ ಬರೆಯಲಿದೆ. ಆಯುಧಪೂಜೆಗೆ ಜಾತಿ–ಧರ್ಮದ ಬೇಲಿಯಿಲ್ಲ. ಬಡವ–ಶ್ರೀಮಂತ ಎಂಬ ಭೇದ ಭಾವವಿಲ್ಲ. ವಸ್ತುಗಳನ್ನು ಸ್ವಚ್ಛಗೊಳಿಸಿ, ಶ್ರದ್ಧಾ ಭಕ್ತಿಯಿಂದ ಪೂಜಿಸಿ, ಕುಂಬಳಕಾಯಿ ಒಡೆದು, ನೈವೇದ್ಯ ಸಮರ್ಪಿಸುವುದು ಆಚರಣೆಯ ಪ್ರಮುಖ ಭಾಗವಾಗಿದೆ.