ದೇವಿಯ ವಿಗ್ರಹದ ಮುಂದೆ ಕುಳಿತು 20 ನಿಮಿಷ ಪೂಜಾ ಕೈಂಕರ್ಯ ನಡೆಸಿದ ಅವರು, ‘ಚಾಮುಂಡೇಶ್ವರಿ ತಾಯಿಗೆ ಕುಮಾರಸ್ವಾಮಿ ಹೆಸರಲ್ಲಿ ಸಂಕಲ್ಪ ಮಾಡಿದ್ದೇನೆ. ದೇವರ ಆಶೀರ್ವಾದ ಇರುವವರೆಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುತ್ತಾರೆ. ಅವರಿಗೆ ಚಾಮುಂಡೇಶ್ವರಿಯ ಅನುಗ್ರಹ ಇದೆ. ಇನ್ನು ಮುಂದೆ ಎಲ್ಲವೂ ದೇವರಮಯ’ ಎಂದರು.