ರಾಂಪುರ ಆನೆ ಶಿಬಿರದಿಂದ ‘ಗಣೇಶ’, ‘ಪಾರ್ಥ’ ಮತ್ತು ‘ಜಯಪ್ರಕಾಶ’ ಆನೆಗಳ ನೆರವಿನಿಂದ ಗುರುವಾರ ಕಾರ್ಯಾಚರಣೆ ನಡೆಸಲಾಯಿತು. ಗ್ರಾಮದಲ್ಲಿ ಏಳು ದಿನಗಳ ಹಿಂದೆ ಹುಲಿ ಕಾಣಿಸಿಕೊಂಡು ಹಸುವೊಂದನ್ನು ತಿಂದುಹಾಕಿತ್ತು. ಈ ಬಗ್ಗೆ ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ ಪಿ.ಎಸ್. ಚೇತನ್ ಮತ್ತು ಸಿಬ್ಬಂದಿ, ಹುಲಿ ಪತ್ತೆಗೆ ಕೂಂಬಿಂಗ್ ನಡೆಸಿದ್ದಾರೆ.