‘ಮದುವೆಯಲ್ಲಿ ಕರಿಮಣಿ ಸರಕ್ಕೆ ಚಿನ್ನದ ಗುಂಡುಗಳನ್ನು ಹಾಕಿ ನೀಡಲಾಗಿತ್ತು. ಅಂದಿನಿಂದಲೂ ಜೋಪಾನವಾಗಿ ಎಷ್ಟೇ ಕಷ್ಟ ಬಂದರೂ ಗಿರವಿ ಇಡದೇ ಜತನದಿಂದ ಕಾಪಾಡಿಕೊಂಡಿದ್ದೆ. ಬಿಸಿಲಿನಲ್ಲಿ ಸುತ್ತಿ ಸೊಪ್ಪನ್ನು ಮಾರಾಟ ಮಾಡಿದ ಹಣವನ್ನು ಚೀಲದಲ್ಲಿ ಹಾಕಿದ್ದೆ. ಆದರೆ, ಕಳ್ಳನೊಬ್ಬ ಕ್ಷಣಾರ್ಧದಲ್ಲಿ ಕಿತ್ತುಕೊಂಡು ಹೋಗಿದ್ದಾನೆ’ ಎಂದು ಅವರು ರೋಧಿಸುತ್ತಿದ್ದರು.