‘ಸಿದ್ದರಾಮಯ್ಯ ಕಂಡರೆ ಕನಿಕರ ಬರುತ್ತದೆ. ಅವರ ಕಾಲದಲ್ಲಿ ಡಿಐಜಿ ನೇಮಕಾತಿ ಸಮಿತಿ ಅಧ್ಯಕ್ಷರೇ ಸಿಕ್ಕಿಬಿದ್ದಿದ್ದರು. ದಕ್ಷ ಆಡಳಿತ ನೀಡಿದ್ದೇನೆ ಎನ್ನುವ ಇದೇ ಸಿದ್ದರಾಮಯ್ಯ ಎಫ್ಐಆರ್ನಲ್ಲಿ ಹೆಸರು ಬಂದಿದ್ದರೂ ಸಿಐಡಿಗೆ ಕೊಟ್ಟು ಪ್ರಕರಣ ಮುಚ್ಚಿ ಹಾಕಿದ್ದರು. ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಮಾಡಿಸುತ್ತೇವೆ ಎಂದು ಡಿವೈಎಸ್ಪಿ ಒಳಗೊಂಡ ದೊಡ್ಡ ಗ್ಯಾಂಗ್ ₹ 18 ಕೋಟಿ ವಸೂಲಿ ಮಾಡಿತ್ತು. ಎಫ್ಐಆರ್ ಮಾಡಿದರು, ಸಿಎಡಿಗೆ ಕಳುಹಿಸಿದರು; ಕೊನೆಗೆ ಮುಚ್ಚಿ ಹಾಕಿದರು. ಸದನದಲ್ಲಿ ಈ ಬಗ್ಗೆ ನಾವೇ ಕೇಳಿದ್ದೆವು. ಗಲಾಟೆ ಮಾಡಿದ್ದೆವು. ಆದರೂ ಆ ಸರ್ಕಾರ ಸ್ಪಂದಿಸಲಿಲ್ಲ’ ಎಂದು ಆರೋಪಿಸಿದರು.