ಈ ಎಲ್ಲ ಬೆಳವಣಿಗೆಗಳ ಸಂಬಂಧ ಜಿಲ್ಲಾಧಿಕಾರಿ ಅವರು ಗುರುವಾರ ಸಂಜೆ ತಮ್ಮ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ವೇಳೆ ಅಮಾನತು ವಿಷಯವನ್ನು ತಮ್ಮ ಗಮನಕ್ಕೆ ತಾರದಿರುವ ಕುರಿತು ಅವರು ಅಸಮಾಧಾನ ಹೊರ ಹಾಕಿದ್ದರು ಎನ್ನಲಾಗಿದೆ. ಅರ್ಧ ನಿಮಿಷಗಳಷ್ಟು ಕಾಲ ಸಚಿವರೊಬ್ಬರ ಕಾರನ್ನು ತಡೆದ ಕಾರಣಕ್ಕೆ ಅಮಾನತಿನಂತಹ ಶಿಕ್ಷೆ ಎಷ್ಟು ಸರಿ? ಸಚಿವರು ಮೌಖಿಕವಾಗಿ ಹೇಳಿದ್ದನ್ನು ಚುನಾವಣಾ ಸಂದರ್ಭದಲ್ಲಿ ಅನುಸರಿಸುವುದು ಎಷ್ಟು ಉಚಿತ? ಎಂದೆಲ್ಲ ತರಾಟೆಗೆ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ.