ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹಣ್ಣಿನ ವ್ಯಾಪಾರಿ ಶಿವಮಲ್ಲಪ್ಪ, ‘ಅರಮನೆಯ ಸಮೀಪ ಪರಂಗಿ, ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ‘ಫ್ರೂಟ್ ಸಾಲಡ್’ ವ್ಯಾಪಾರ ಮಾಡಿಕೊಂಡಿದ್ದೆ. ನಿತ್ಯ ವ್ಯಾಪಾರವಾದ ಹಣದಲ್ಲಿ ನಮ್ಮ ಬದುಕನ್ನು ನಡೆಸುತ್ತಿದ್ದೆವು. ಈಗ ವ್ಯಾಪಾರವೇ ಇಲ್ಲವಾಗಿ 15 ದಿನಗಳು ಕಳೆದಿವೆ. ಯಾವ ಕೆಲಸ ಮಾಡುವುದು ಎಂದು ತಿಳಿಯುತ್ತಿಲ್ಲ’ ಎಂದು ತಿಳಿಸಿದರು.