‘ಕಟ್ಟನಾಯಕ ಅವರ ಕಿರುಕುಳ ಸಹಿಸಲಾಗದೆ 2021ರ ಜನವರಿಯಲ್ಲಿ ದಯಾಮರಣ ಕೋರಿಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ ಮೇಲೆ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸರ್ವೆ ನಡೆಸಿ, ರಸ್ತೆ ಇಲ್ಲ ಎಂದು ವರದಿ ಸಲ್ಲಿಸಿದ್ದರು. ಈ ನಡುವೆ ಲೋಕೋಪಯೋಗಿ ಇಲಾಖೆ ₹1.90 ಕೋಟಿ ವೆಚ್ಚದಲ್ಲಿ ಕಟ್ಟನಾಯಕ ಜಮೀನು ಸಂಪರ್ಕಿಸುವ 40 ಅಡಿ ರಸ್ತೆ ಕಾಮಗಾರಿ ನಡೆಸಿ ಡಾಂಬರು ಹಾಕಿದೆ. ಹೀಗಿದ್ದರೂ ಕಿರುಕುಳ ತಪ್ಪಿಲ್ಲ’ ಎಂದು ಹೇಳಿದರು.