ಮೈಸೂರು: ‘ಜನರು ಆಕ್ರೋಶದಲ್ಲಿ ಕಲ್ಲು, ಮೊಟ್ಟೆ ಎಸೆಯುವುದು ಸಾಮಾನ್ಯ. ಹಾಗೆಂದು, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿರುವುದನ್ನು ನಾನು ಸಮರ್ಥಿಸುವುದಿಲ್ಲ’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಹೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಜನ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ, ಹತ್ಯೆ ಯತ್ನದ ಸ್ವರೂಪ ನೀಡುವುದು ಸರಿಯಲ್ಲ. ಮಹಾತ್ಮ ಗಾಂಧೀಜಿಗೂ–ಸಿದ್ದರಾಮಯ್ಯ ಅವರಿಗೂ ಎಲ್ಲಿಯ ಸಂಬಂಧ? ಆ ರೀತಿಯ ಹೋಲಿಕೆಯೇ ಸರಿಯಲ್ಲ’ ಎಂದರು.
‘ರಾಜಕೀಯ ನಾಯಕರ ಹತ್ಯೆ ಮಾಡುವಂಥ ಕೆಟ್ಟ ವಾತಾವರಣ ರಾಜ್ಯದಲ್ಲಿಲ್ಲ’ ಎಂದು ಪ್ರತಿಕ್ರಿಯಿಸಿದರು.