ಉತ್ತಮ ಮಳೆಯಿಂದಾಗಿ ವೀರನಹೊಸಹಳ್ಳಿ ವಲಯಕ್ಕೆ ಸೇರಿದ ಮುದಗನೂರು ಕೆರೆ ಭರ್ತಿಯಾಗಿದ್ದು, ಕೆರೆ ಅಂಗಳದಲ್ಲಿ ಅಳವಡಿಸಿರುವ ರೈಲ್ವೆ ಕಂಬಿ ತಡೆಗೋಡೆ ಅವೈಜ್ಞಾನಿಕವಾದ ಕಾರಣ ಆನೆಗಳು ಸರಾಗವಾಗಿ ಗ್ರಾಮಕ್ಕೆ ದಾಳಿ ಇಡುತ್ತಿದೆ. ಕಳೆದ ಮೂರು ವರ್ಷದಿಂದ ಕೆರೆಯಲ್ಲಿ ನೀರಿಲ್ಲದೆ ಆನೆಗಳು ತಡೆಗೋಡೆ ದಾಟುವುದು ಕಷ್ಟ ಸಾಧ್ಯವಿತ್ತು. ಈ ಸಾಲಿನಲ್ಲಿ ಭರ್ತಿಯಾಗಿದ್ದರಿಂದ ಆನೆ ತಡೆಗೋಡೆಯನ್ನು ಸರಾಗವಾಗಿ ಈಜಿ ದಾಟುತ್ತಿದೆ. ಇದರಿಂದಾಗಿ ಮುದಗನೂರು, ಚಿಕ್ಕಹೆಜ್ಜೂರು, ಕೊಳವಿಗೆ, ಭರತವಾಡಿ, ವೀರನಹೊಸಹಳ್ಳಿ, ದೊಡ್ಡಹೆಜ್ಜೂರು, ಪಂಚವಳ್ಳಿ ಭಾಗದ ರೈತರು ಬೆಳೆದ ಫಸಲು ಕಳೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮದ ನಿವಾಸಿ ದಾ.ರಾ.ಮಹೇಶ್ ಆರೋಪಿಸಿದ್ದಾರೆ.