ಮೈಸೂರು: ಕಾಫಿ ಡೇ ಸಮೂಹದ ಸಂಸ್ಥಾಪಕ ದಿವಂಗತಸಿದ್ಧಾರ್ಥ ಹೆಗ್ಡೆ ಅವರ ತಂದೆ ಗಂಗಯ್ಯ ಹೆಗ್ಡೆಮಧ್ಯಾಹ್ನ 3 ಗಂಟೆಗೆ ನಿಧನರಾದರು.
ಇಲ್ಲಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಗಂಗಯ್ಯ ಹೆಗ್ಡೆ ಅವರ ನಿಧನವನ್ನು ವೈದ್ಯರು ಖಚಿತಪಡಿಸಿದ್ದಾರೆ.
ವಯೋಸಹಜ ಸಮಸ್ಯೆಗಳಿಂದ ಗಂಗಯ್ಯ ಹೆಗ್ಡೆ ಸುಮಾರು ಒಂದೂವರೆ ತಿಂಗಳಿನಿಂದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ರ ಸಿದ್ಧಾರ್ಥ ನಿಧನರಾದಾಗ ಅವರು ಕೋಮಾದಲ್ಲಿದ್ದರು. ಹೀಗಾಗಿ, ಅಂತ್ಯಕ್ರಿಯೆಗಾಗಿ ತವರೂರು ಮೂಡಿಗೆರೆ ತಾಲ್ಲೂಕಿನ ಚೇತನಹಳ್ಳಿಗೆ ಹೋಗಲು ಸಾಧ್ಯವಾಗಿರಲಿಲ್ಲ.
ಇದು ಬೆಳಗ್ಗೆಯಿಂದಲೇಅವರ ನಿಧನದ ಕುರಿತಾದ ಸುದ್ದಿಗಳುಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.