‘ನಿನ್ನೊಳಗ ನೀನು ಇಳಿದು ನೋಡಣ್ಣ’ ಎಂಬ ತತ್ವಪದವು ಎಂತಹವರನ್ನೂ ಚಿಂತನೆಗೆ ಹಚ್ಚಿತು. ‘ಗುಬ್ಬಿಯೊಂದು ಗೂಡು ಕಟ್ಯಾದೋ, ಆ ಗುಡಿನೊಳಗ ಜೀವ ಇಟ್ಟು ಎಲ್ಲಿ ಹೋಗಿದೆಯೋ’, ‘ಇಂದು ನೋಡಿರಿ ಲೋಕದ ಕಣ್ಣ... ಮಳ್ಳ ಜನರಿಗೆ ತಿಳಿಯದಲ್ಲಣ್ಣ’,‘ಸತ್ಯವಂತರ ಸಂಘವಿರಲು ತೀರ್ಥವೇತಕೆ’ ಎಂಬ ತತ್ವಪದ ಸೇರಿದಂತೆ ಹಲವು ಬಗೆಯ ತತ್ಪಪದಗಳು ಪ್ರೇಕ್ಷಕರ ಮನಗೆದ್ದವು.