ಮೈಸೂರು: ಇಲ್ಲಿನ ವೀರನಗೆರೆ ಬಡಾವಣೆಯಲ್ಲಿರುವ ವೀರಗಲ್ಲುಗಳಿಗೆ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ ನೇತೃತ್ವದಲ್ಲಿ ಗುರುವಾರ ಪುಷ್ಪನಮನ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ‘ಮೈಸೂರಿನ ಮೂಲನಿವಾಸಿಗಳಾದ ದೊರೆ ನಾಯಕ ಜನಾಂಗದ ಪಾಳೆಯಗಾರ ಮಾರನಾಯಕ ಸೇರಿದಂತೆ ಇನ್ನಿತರರ ಚರಿತ್ರೆಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ. ಈಗ ಈ ವೀರಗಲ್ಲುಗಳಿಗೆ ನಮಿಸುವ ಮೂಲಕ ಚರಿತ್ರೆಯನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.
ಮುಖಂಡರಾದ ಶಂಕರ್, ಸ್ವಾಮಿ, ಶ್ರೀನಿವಾಸ್ ವೆಂಕಟೇಶ, ಗೋವಿಂದರಾಜು ಇದ್ದರು.