ಘಟನೆ ಹಿನ್ನೆಲೆ: ಕೆ.ಆರ್ ಠಾಣೆಯ ಇನ್ಸ್ಪೆಕ್ಟರ್ ವಿ.ನಾರಾಯಣಸ್ವಾಮಿ ಅವರಿಗೆ ತಾನು ಐಪಿಎಸ್ ಪ್ರೊಬೇಷನರಿ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದ್ದಾನೆ. ತಾನು ಮತ್ತು ತನ್ನ ಕುಟುಂಬ ಸದಸ್ಯರು ಪ್ರವಾಸ ಹೋಗಬೇಕಿದ್ದು, ಒಂದು ಇನೋವಾ ಕಾರು ಕಳುಹಿಸಿಕೊಡುವಂತೆ ಸೂಚಿಸಿದ್ದಾನೆ. ಅಲ್ಲದೇ, ಕಾರಿನ ಬಾಡಿಗೆ ಮೊತ್ತ, ಚಾಲಕರ ಸಂಬಳ ಮತ್ತು ಬಾಟವನ್ನು ಕೊಡುವಂತೆಯೂ ಆದೇಶಿಸಿದ್ದಾನೆ. ಇದರಿಂದ ಅನುಮಾನಗೊಂಡ ನಾರಾಯಣಸ್ವಾಮಿ, ಇಬ್ಬರು ಪೊಲೀಸರನ್ನು ದಿಲೀಪ್ ಮನೆ ಬಳಿ ಪರಿಶೀಲನೆಗೆ ಕಳಿಸಿದ್ದಾರೆ. ಈ ವೇಳೆ ದಿಲೀಪ್ ಐಪಿಎಸ್ ಅಧಿಕಾರಿಯಲ್ಲ ಎಂಬುದು ಗೊತ್ತಾಗಿದೆ. ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ತಾನು ಐಪಿಎಸ್ ಅಧಿಕಾರಿಯಲ್ಲ ಎಂಬುದನ್ನು ಆತ ಒಪ್ಪಿಕೊಂಡಿದ್ದಾನೆ.