<p><strong>ಮೈಸೂರು: </strong>ನಗರದ ನಂಜರಾಜ ಬಹದ್ದೂರು ಛತ್ರದ ಆವರಣದಲ್ಲಿ ಹಲಸಿನ ಘಮಲು ಪಸರಿಸಿತ್ತು. ಶನಿವಾರ ಜನಜಾತ್ರೆಯೇ ಅಲ್ಲಿತ್ತು. ಕೆಂಪು ಹಲಸಿನ ತೊಳೆಗಾಗಿ ಹಲರು ಮುಗಿಬಿದ್ದರು. ಹಲಸಿನ ತರಹೇವಾರಿ ತಿನಿಸುಗಳನ್ನೂ ಸವಿದರು.</p>.<p>ಹಲಸಿನ ಹಣ್ಣಿನ ತೊಳೆ ಬಿಡಿಸಿ, ಮಾರಾಟ ಮಾಡುವುದು ನಿರಂತರವಾಗಿತ್ತು. ಮಳಿಗೆಗಳಲ್ಲಿ ಹಣ್ಣುಗಳ ರುಚಿ ಸವಿದು ಮನೆಗೂ ಕೊಂಡೊಯ್ದರು.</p>.<p>ಹಲಸಿನ ಹಣ್ಣಿನ ಬೆಲೆ ದುಬಾರಿಯಾಯ್ತು ಎಂಬ ಮಾತು ಮಾರ್ದನಿಸಿದರೂ; ಖರೀದಿಯ ಉತ್ಸಾಹ ಕಡಿಮೆಯಾಗಿರಲಿಲ್ಲ. ಮೈಸೂರಿಗರಷ್ಟೇ ಅಲ್ಲದೇ ಸುತ್ತಮುತ್ತಲಿನ ಹಳ್ಳಿಗಳ ಜನರು, ಬೆರಳೆಣಿಕೆಯ ವಿದೇಶಿಗರು ‘ಹಬ್ಬ’ದಲ್ಲಿ ಹಲಸಿನ ರುಚಿ ಸವಿದರು. ಕೆಂಪು ಹಲಸು ಸಿಗದಿದ್ದಾಗ ಆಕ್ಷೇಪ ವ್ಯಕ್ತಪಡಿಸಿದರು.</p>.<p><strong>ಸಸಿಗಳಿಗೆ ಭಾರಿ ಬೇಡಿಕೆ:</strong>ಹಲಸಿನ ಹಬ್ಬಕ್ಕೆ ಚಾಲನೆ ಸಿಗುವ ಮುನ್ನವೇ ಛತ್ರದ ಹೊರಾಂಗಣದಲ್ಲಿ ದೇವನಹಳ್ಳಿಯ ತೇಜ ನರ್ಸರಿಯ ಶಿವನಾಪುರದ ರಮೇಶ್ ತಂದಿಳಿಸಿದ್ದ ಹಲಸಿನ ಸಸಿಗಳು ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದವು. ಮಧ್ಯಾಹ್ನದ ವೇಳೆಗೆ ಶೇ 50ಕ್ಕಿಂತಲೂ ಹೆಚ್ಚು ಸಸಿಗಳು ಮಾರಾಟವಾದವು.</p>.<p>ರಾಮಚಂದ್ರ ಹಲಸು, ಬೈರಚಂದ್ರ, ನಾಗಚಂದ್ರ, ತೂಬಗೆರೆ, ದಂಗ್ ಸೂರ್ಯ, ಜೇನು, ಹೆಜ್ಜೇನು, ವಿಯೆಟ್ನಾಂ ಸೂಪರ್ ಅರ್ಲಿ, ಅಂಟು ರಹಿತ, ಸರ್ವಋತು, ಸಿಂಗಪೂರ್, ಲಾಲ್ಭಾಗ್, ರಾಜ ರುದ್ರಾಕ್ಷಿ, ಸಿಂಧು, ಜಿ–11, ಜಿ–33 ತಳಿಯ ಸಸಿಗಳು ಮಾರಾಟವಾದವು.</p>.<p>ಸಸಿ ಖರೀದಿಗೆ ಮುಂದಾದ ಹಲವರು ಸಿದ್ದು, ಶಂಕರ ಹಲಸಿನ ಸಸಿಗಳನ್ನು ಕೇಳಿದರು. ನಾಡಿನಲ್ಲಿ ಮನೆ ಮಾತಾಗಿರುವ ಈ ತಳಿಯ ಹಲಸಿನ ಗಿಡಗಳನ್ನು ತರಿಸಬೇಕಿತ್ತು ಎಂದು ಮಾತನಾಡಿಕೊಂಡರು.</p>.<p>ಗಿಡ ಖರೀದಿಸಿದ ಹಲವರು ಸಸಿ ನೆಡುವುದು, ಗೊಬ್ಬರ ಹಾಕುವುದು, ಆರೈಕೆ ಮಾಡುವ ಬಗ್ಗೆಯೂ ನರ್ಸರಿಯವರಿಂದಲೇ ಕೇಳಿ ತಿಳಿದುಕೊಂಡರು. ಕೆಲವರು ಗಿಡ ದೊಡ್ಡದಾಗಿ ಹಣ್ಣು ಯಾವಾಗ ಬಿಡಲಿದೆ? ಅದರ ರುಚಿ, ವೈಶಿಷ್ಟ್ಯದ ಬಗ್ಗೆಯೂ ವಿಚಾರಿಸಿ ಸಸಿ ಖರೀದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ನಗರದ ನಂಜರಾಜ ಬಹದ್ದೂರು ಛತ್ರದ ಆವರಣದಲ್ಲಿ ಹಲಸಿನ ಘಮಲು ಪಸರಿಸಿತ್ತು. ಶನಿವಾರ ಜನಜಾತ್ರೆಯೇ ಅಲ್ಲಿತ್ತು. ಕೆಂಪು ಹಲಸಿನ ತೊಳೆಗಾಗಿ ಹಲರು ಮುಗಿಬಿದ್ದರು. ಹಲಸಿನ ತರಹೇವಾರಿ ತಿನಿಸುಗಳನ್ನೂ ಸವಿದರು.</p>.<p>ಹಲಸಿನ ಹಣ್ಣಿನ ತೊಳೆ ಬಿಡಿಸಿ, ಮಾರಾಟ ಮಾಡುವುದು ನಿರಂತರವಾಗಿತ್ತು. ಮಳಿಗೆಗಳಲ್ಲಿ ಹಣ್ಣುಗಳ ರುಚಿ ಸವಿದು ಮನೆಗೂ ಕೊಂಡೊಯ್ದರು.</p>.<p>ಹಲಸಿನ ಹಣ್ಣಿನ ಬೆಲೆ ದುಬಾರಿಯಾಯ್ತು ಎಂಬ ಮಾತು ಮಾರ್ದನಿಸಿದರೂ; ಖರೀದಿಯ ಉತ್ಸಾಹ ಕಡಿಮೆಯಾಗಿರಲಿಲ್ಲ. ಮೈಸೂರಿಗರಷ್ಟೇ ಅಲ್ಲದೇ ಸುತ್ತಮುತ್ತಲಿನ ಹಳ್ಳಿಗಳ ಜನರು, ಬೆರಳೆಣಿಕೆಯ ವಿದೇಶಿಗರು ‘ಹಬ್ಬ’ದಲ್ಲಿ ಹಲಸಿನ ರುಚಿ ಸವಿದರು. ಕೆಂಪು ಹಲಸು ಸಿಗದಿದ್ದಾಗ ಆಕ್ಷೇಪ ವ್ಯಕ್ತಪಡಿಸಿದರು.</p>.<p><strong>ಸಸಿಗಳಿಗೆ ಭಾರಿ ಬೇಡಿಕೆ:</strong>ಹಲಸಿನ ಹಬ್ಬಕ್ಕೆ ಚಾಲನೆ ಸಿಗುವ ಮುನ್ನವೇ ಛತ್ರದ ಹೊರಾಂಗಣದಲ್ಲಿ ದೇವನಹಳ್ಳಿಯ ತೇಜ ನರ್ಸರಿಯ ಶಿವನಾಪುರದ ರಮೇಶ್ ತಂದಿಳಿಸಿದ್ದ ಹಲಸಿನ ಸಸಿಗಳು ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದವು. ಮಧ್ಯಾಹ್ನದ ವೇಳೆಗೆ ಶೇ 50ಕ್ಕಿಂತಲೂ ಹೆಚ್ಚು ಸಸಿಗಳು ಮಾರಾಟವಾದವು.</p>.<p>ರಾಮಚಂದ್ರ ಹಲಸು, ಬೈರಚಂದ್ರ, ನಾಗಚಂದ್ರ, ತೂಬಗೆರೆ, ದಂಗ್ ಸೂರ್ಯ, ಜೇನು, ಹೆಜ್ಜೇನು, ವಿಯೆಟ್ನಾಂ ಸೂಪರ್ ಅರ್ಲಿ, ಅಂಟು ರಹಿತ, ಸರ್ವಋತು, ಸಿಂಗಪೂರ್, ಲಾಲ್ಭಾಗ್, ರಾಜ ರುದ್ರಾಕ್ಷಿ, ಸಿಂಧು, ಜಿ–11, ಜಿ–33 ತಳಿಯ ಸಸಿಗಳು ಮಾರಾಟವಾದವು.</p>.<p>ಸಸಿ ಖರೀದಿಗೆ ಮುಂದಾದ ಹಲವರು ಸಿದ್ದು, ಶಂಕರ ಹಲಸಿನ ಸಸಿಗಳನ್ನು ಕೇಳಿದರು. ನಾಡಿನಲ್ಲಿ ಮನೆ ಮಾತಾಗಿರುವ ಈ ತಳಿಯ ಹಲಸಿನ ಗಿಡಗಳನ್ನು ತರಿಸಬೇಕಿತ್ತು ಎಂದು ಮಾತನಾಡಿಕೊಂಡರು.</p>.<p>ಗಿಡ ಖರೀದಿಸಿದ ಹಲವರು ಸಸಿ ನೆಡುವುದು, ಗೊಬ್ಬರ ಹಾಕುವುದು, ಆರೈಕೆ ಮಾಡುವ ಬಗ್ಗೆಯೂ ನರ್ಸರಿಯವರಿಂದಲೇ ಕೇಳಿ ತಿಳಿದುಕೊಂಡರು. ಕೆಲವರು ಗಿಡ ದೊಡ್ಡದಾಗಿ ಹಣ್ಣು ಯಾವಾಗ ಬಿಡಲಿದೆ? ಅದರ ರುಚಿ, ವೈಶಿಷ್ಟ್ಯದ ಬಗ್ಗೆಯೂ ವಿಚಾರಿಸಿ ಸಸಿ ಖರೀದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>