ಮೈಸೂರು: ಇಲ್ಲಿನ ಜಿಲ್ಲಾ ಪತ್ರಿಕಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಗೋವಿಂದ ರಾಜು ಅವರು ಡಿ.ಪಿ. ಚಿಕ್ಕಣ್ಣ ಅವರ ಜನಸ್ಪೋಟ... ಮನಸಂಕಟ ಹಾಗೂ ಗಣೇಶ್ ನಿಲವಾಗಿಲು ಅವರ ಚಕ್ರವರ್ತಿ ನೆಪೋಲಿಯನ್ ಕೃತಿಗಳನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, 'ಚಕ್ರವರ್ತಿ ನೆಪೋಲಿಯನ್' ರಂಗಪ್ರಯೋಗಕ್ಕೆ ಒಳಪಡಿಸುವಂತಹ ಕೃತಿ ಎಂದು ಶ್ಲಾಘಿಸಿದರು.
ಸಾಹಿತಿ ಬನ್ನೂರು ಕೆ.ರಾಜು, ಲೇಖಕ ಡಿ.ಪಿ.ಚಿಕ್ಕಣ್ಣ, ಗಣೇಶ್ ನಿಲವಾಗಿಲು, ಶಿಕ್ಷಕ ದೊರೆಸ್ವಾಮಿ, ಜಿ.ಕೆ.ರೂಪಶ್ರೀ ಇದ್ದರು.