ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಪ್ರಭಾರ ನಿರ್ದೇಶಕರು ಹೊರಡಿಸಿದ ಹೊಸ ನೇಮಕಾತಿ ಅಧಿಸೂಚನೆಯು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಚಟುವಟಿಕೆಗಳಿಗೆ ಹಿನ್ನಡೆ ಉಂಟುಮಾಡುತ್ತಿದೆ. ಈ ಅಧಿಸೂಚನೆ ಹಿಂಪಡೆಯಲು ಸಂಬಂಧಪಟ್ಟವರಿಗೆ ಆದೇಶ ನೀಡುವಂತೆಯೂ ಎಸ್.ಎಲ್.ಭೈರಪ್ಪ, ದೇವನೂರ ಮಹಾದೇವ, ಡಾ.ಓ.ಎಲ್.ನಾಗಭೂಷಣಸ್ವಾಮಿ, ಪ.ಮಲ್ಲೇಶ್ ಮತ್ತು ಜಿ.ಎಸ್.ಜಯದೇವ ಸೇರಿದಂತೆ 25 ಸಾಹಿತಿಗಳು ಬಹಿರಂಗ ಪತ್ರದ ಮೂಲಕ ಒತ್ತಾಯಿಸಿದ್ದಾರೆ.