ಈಗಲೂ ವರದಿ ನೀಡಲಿ: ಸಾ.ರಾ.ಮಹೇಶ್
ಜಮೀನು ವಿಚಾರದಲ್ಲಿ ಕಠಿಣ ಕ್ರಮ ಕೈಗೊಂಡಿದ್ದೇ ವರ್ಗಾವಣೆಗೆ ಕಾರಣ ಇರಬಹುದು ಎಂದು ರೋಹಿಣಿ ಸಿಂಧೂರಿ ಹೇಳಿರುವುದಕ್ಕೆ ತಿರುಗೇಟು ನೀಡಿರುವ ಶಾಸಕ ಸಾ.ರಾ.ಮಹೇಶ್, ‘ಅವರು ಈಗ ಇಲ್ಲಿಯ ಜಿಲ್ಲಾಧಿಕಾರಿ ಅಲ್ಲದಿರಬಹುದು. ಆದರೆ, ಈಗಲೂ ಐಎಎಸ್ ಅಧಿಕಾರಿಯೇ. ಎಲ್ಲೆಲ್ಲಿ ಭೂ ಅಕ್ರಮ ನಡೆದಿದೆ ಎಂಬುದರ ವಿವರವಾದ ವರದಿಯೊಂದನ್ನು ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ ಸಲ್ಲಿಸುವ ಕೆಲಸ ಮಾಡಲಿ’ ಎಂದರು.