ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ರುವನಾರಾಯಣಗೆ ತಕ್ಕ ಪಾಠ ಕಲಿಸಿದ್ದೇವೆ

ನಂಜನಗೂಡು ಶಾಸಕ, ಶ್ರೀನಿವಾಸಪ್ರಸಾದ್ ಅಳಿಯ ಬಿ.ಹರ್ಷವರ್ಧನ
Last Updated 23 ಮೇ 2019, 14:44 IST
ಅಕ್ಷರ ಗಾತ್ರ

ಮೈಸೂರು: ‘ನಮ್ಮ ಮಾವನವರಿಗೆ ಯಾರು ಯಾರು ನೋವು ನೀಡಿದ್ದರೋ ಅವರೆಲ್ಲರಿಗೂ ತಕ್ಕ ಪಾಠ ಕಲಿಸಿದ ಹಾಗಾಯಿತು’ ಎಂದು ನಂಜನಗೂಡು ಶಾಸಕ, ವಿ.ಶ್ರೀನಿವಾಸಪ್ರಸಾದ್ ಅಳಿಯ ಬಿ.ಹರ್ಷವರ್ಧನ ಇಲ್ಲಿ ಪ್ರತಿಕ್ರಿಯಿಸಿದರು.

‘ಸಚಿವ ಸ್ಥಾನದಿಂದ ಅವರನ್ನು ತೆಗೆದುಹಾಕಿದ್ದ ಸಿದ್ದರಾಮಯ್ಯ ಅವರಿಗೂ ಪಾಠ ಕಲಿಸಲಾಗಿತ್ತು. ಧ್ರುವನಾರಾಯಣ ಒಬ್ಬರು ಬಾಕಿ ಉಳಿದಿದ್ದರು. ಈಗ ಅವರಿಗೂ ಪಾಠ ಕಲಿಸಿದಂತಾಗಿದೆ. ಮಾವನವರಿಂದ ಅನುಕೂಲ ಪಡೆದು, ಅವರಿಗೆ ನೋವುಂಟು ಮಾಡಿದ ಯಾರಿಗೂ ಒಳ್ಳೆಯದಾಗಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಧ್ರುವನಾರಾಯಣ ಅವರಿಗೆ ದೆಹಲಿ ತೋರಿಸಿದ್ದೇ ಶ್ರೀನಿವಾಸಪ್ರಸಾದ್ ಅವರು. ಆದರೆ, ಅವರನ್ನೇ ತುಳಿದು ಸವಾರಿ ಮಾಡಿದ್ದರು. ನಮ್ಮ ಮಾವ ಕೇಂದ್ರ ಸಚಿವರಾಗುತ್ತಾರೆ. ಅವರೊಂದಿಗೆ ಗೂಟದ ಕಾರಿನಲ್ಲಿ ನಾವು ಹೋಗುತ್ತೇವೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT