<p><strong>ಮೈಸೂರು:</strong> ‘ಮನುಷ್ಯತ್ವವೇ ಚೂರು ಚೂರಾಗಿರುವ, ದ್ವೇಷದ ದಳ್ಳುರಿಯೇ ದಹನವಾಗುವ ಕಾಲಘಟ್ಟದಲ್ಲಿ ಭಾವಗೀತೆಗಳು ಮನಸ್ಸುಗಳನ್ನು ಒಗ್ಗೂಡಿಸಲಿವೆ’ ಎಂದು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ತಿಳಿಸಿದರು.</p>.<p>ಚಾಮರಾಜನಗರದ ರಂಗತರಂಗ ಟ್ರಸ್ಟ್ ಭಾನುವಾರ ಮುಸ್ಸಂಜೆ ನಗರದಲ್ಲಿ ಆಯೋಜಿಸಿದ್ದ 21ನೇ ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆ–2019ರ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಯುವಕರೇ ದೇಶದ ಶಕ್ತಿ. ಆದರೆ ಸೂಕ್ತ ಮಾರ್ಗದರ್ಶನವಿಲ್ಲದೆ ಈ ಶಕ್ತಿ ವ್ಯಯವಾಗುತ್ತಿದೆ. ಒಡೆದಿರುವ ಯುವ ಸಮೂಹದ ಭಾವ ಒಗ್ಗೂಡಿಸಬೇಕಿದೆ’ ಎಂದು ಹೇಳಿದರು.</p>.<p>‘ಸುಗಮ ಸಂಗೀತ, ಭಾವಗೀತೆ ಗಾಯನ ಹೃದಯಕ್ಕೆ ತಂಪೆರೆಯುವ ತಂಗಾಳಿಯಿದ್ದಂತೆ. ಮನಸ್ಸನ್ನು ಪ್ರಫುಲ್ಲಗೊಳಿಸುವ ಗೀತೆಗಳಿವು. ನೆಲಮೂಲದ ಸಂಸ್ಕೃತಿಯನ್ನು ಮಕ್ಕಳಲ್ಲಿ ಮೂಡಿಸುವ ಜತೆಯಲ್ಲೇ, ಭಾವವನ್ನು ನಮ್ಮದಾಗಿಸಿಕೊಂಡು ಬೆಳಕಿನೆಡೆಗೆ ಹೆಜ್ಜೆ ಹಾಕಬೇಕಿದೆ’ ಎಂದರು.</p>.<p>ಹಿರಿಯ ರಂಗಕರ್ಮಿ ಎಚ್.ಜನಾರ್ಧನ್ (ಜನ್ನಿ) ವಿಜೇತರಿಗೆ ಬಹುಮಾನ ವಿತರಿಸಿದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ತೀರ್ಪುಗಾರರಾದ ಎ.ಎಸ್.ಪ್ರಸನ್ನಕುಮಾರ್, ಭುವನೇಶ್ವರಿ ವೆಂಕಟೇಶ್, ರಂಗ ತರಂಗದ ಅಂಬಳೆ ಸಿದ್ದರಾಜು ಉಪಸ್ಥಿತರಿದ್ದರು. ವಿದ್ವಾಂಸ ಮಲೆಯೂರು ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸೋಮಶೇಖರ್ ಸ್ವಾಗತಿಸಿದರು.</p>.<p><strong>ವಿಜೇತರು: </strong>ಹಿರಿಯರ ವಿಭಾಗದಲ್ಲಿ ಎನ್.ಶಶಾಂಕ್, ಹೃತ್ವಿಕ್ ಸಿ.ರಾಜ್, ಅಮೂಲ್ಯ ಆರ್.ಭಟ್, ಎ.ಎಸ್.ರವಿಪ್ರಕಾಶ್, ಶ್ರದ್ಧಾ ಕುಟ್ನಿಕರ್ ಕ್ರಮವಾಗಿ ಮೊದಲ ಐದು ಸ್ಥಾನ ಗಳಿಸಿದರೆ, ಕಿರಿಯರ ವಿಭಾಗದಲ್ಲಿ ಎಚ್.ವಿ.ಶಮಾ, ತನಿಷ್ಕಾ ಎಸ್.ವರ್ಣೇಕರ್, ಎ.ಅದಿತಿ, ಎಚ್.ರಕ್ಷಾರಾವ್ ಮೊದಲ ನಾಲ್ಕನೇಸ್ಥಾನ ಗಳಿಸಿದರೆ, ಚಾಮರಾಜನಗರದ ಸಿರಿಶೆಟ್ಟಿ ಐದನೇ ಸ್ಥಾನ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಮನುಷ್ಯತ್ವವೇ ಚೂರು ಚೂರಾಗಿರುವ, ದ್ವೇಷದ ದಳ್ಳುರಿಯೇ ದಹನವಾಗುವ ಕಾಲಘಟ್ಟದಲ್ಲಿ ಭಾವಗೀತೆಗಳು ಮನಸ್ಸುಗಳನ್ನು ಒಗ್ಗೂಡಿಸಲಿವೆ’ ಎಂದು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ತಿಳಿಸಿದರು.</p>.<p>ಚಾಮರಾಜನಗರದ ರಂಗತರಂಗ ಟ್ರಸ್ಟ್ ಭಾನುವಾರ ಮುಸ್ಸಂಜೆ ನಗರದಲ್ಲಿ ಆಯೋಜಿಸಿದ್ದ 21ನೇ ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆ–2019ರ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಯುವಕರೇ ದೇಶದ ಶಕ್ತಿ. ಆದರೆ ಸೂಕ್ತ ಮಾರ್ಗದರ್ಶನವಿಲ್ಲದೆ ಈ ಶಕ್ತಿ ವ್ಯಯವಾಗುತ್ತಿದೆ. ಒಡೆದಿರುವ ಯುವ ಸಮೂಹದ ಭಾವ ಒಗ್ಗೂಡಿಸಬೇಕಿದೆ’ ಎಂದು ಹೇಳಿದರು.</p>.<p>‘ಸುಗಮ ಸಂಗೀತ, ಭಾವಗೀತೆ ಗಾಯನ ಹೃದಯಕ್ಕೆ ತಂಪೆರೆಯುವ ತಂಗಾಳಿಯಿದ್ದಂತೆ. ಮನಸ್ಸನ್ನು ಪ್ರಫುಲ್ಲಗೊಳಿಸುವ ಗೀತೆಗಳಿವು. ನೆಲಮೂಲದ ಸಂಸ್ಕೃತಿಯನ್ನು ಮಕ್ಕಳಲ್ಲಿ ಮೂಡಿಸುವ ಜತೆಯಲ್ಲೇ, ಭಾವವನ್ನು ನಮ್ಮದಾಗಿಸಿಕೊಂಡು ಬೆಳಕಿನೆಡೆಗೆ ಹೆಜ್ಜೆ ಹಾಕಬೇಕಿದೆ’ ಎಂದರು.</p>.<p>ಹಿರಿಯ ರಂಗಕರ್ಮಿ ಎಚ್.ಜನಾರ್ಧನ್ (ಜನ್ನಿ) ವಿಜೇತರಿಗೆ ಬಹುಮಾನ ವಿತರಿಸಿದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ತೀರ್ಪುಗಾರರಾದ ಎ.ಎಸ್.ಪ್ರಸನ್ನಕುಮಾರ್, ಭುವನೇಶ್ವರಿ ವೆಂಕಟೇಶ್, ರಂಗ ತರಂಗದ ಅಂಬಳೆ ಸಿದ್ದರಾಜು ಉಪಸ್ಥಿತರಿದ್ದರು. ವಿದ್ವಾಂಸ ಮಲೆಯೂರು ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸೋಮಶೇಖರ್ ಸ್ವಾಗತಿಸಿದರು.</p>.<p><strong>ವಿಜೇತರು: </strong>ಹಿರಿಯರ ವಿಭಾಗದಲ್ಲಿ ಎನ್.ಶಶಾಂಕ್, ಹೃತ್ವಿಕ್ ಸಿ.ರಾಜ್, ಅಮೂಲ್ಯ ಆರ್.ಭಟ್, ಎ.ಎಸ್.ರವಿಪ್ರಕಾಶ್, ಶ್ರದ್ಧಾ ಕುಟ್ನಿಕರ್ ಕ್ರಮವಾಗಿ ಮೊದಲ ಐದು ಸ್ಥಾನ ಗಳಿಸಿದರೆ, ಕಿರಿಯರ ವಿಭಾಗದಲ್ಲಿ ಎಚ್.ವಿ.ಶಮಾ, ತನಿಷ್ಕಾ ಎಸ್.ವರ್ಣೇಕರ್, ಎ.ಅದಿತಿ, ಎಚ್.ರಕ್ಷಾರಾವ್ ಮೊದಲ ನಾಲ್ಕನೇಸ್ಥಾನ ಗಳಿಸಿದರೆ, ಚಾಮರಾಜನಗರದ ಸಿರಿಶೆಟ್ಟಿ ಐದನೇ ಸ್ಥಾನ ಗಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>