ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಎಚ್.ಪ್ರಸಾದ್, ಸಾವಿಗೆ ಲಸಿಕೆ ಕಾರಣ ಅಲ್ಲ. ಸುರೇಶ್ ಅವರಿಗೆ ಈ ಮೊದಲೇ ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗ ಇತ್ತು. ಲಸಿಕೆ ಕೊಡದೇ ಹೋಗಿದ್ದರೂ ಅವರು ಅಸ್ವಸ್ಥಗೊಳ್ಳುತ್ತಿದ್ದರು. ಅಧಿಕ ರಕ್ತದೊತ್ತಡದಿಂದ ಅವರ ಮಿದುಳಿಗೆ ಹಾನಿಯಾಗಿತ್ತು. ಇವರಿಗೆ ನೀಡಿದ ವೈಯಲ್ನಿಂದ ಲಸಿಕೆ ಪಡೆದ ಇತರ 9 ಮಂದಿ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.