‘ವಿದ್ಯಾರ್ಥಿಗಳಿಗೆ ದ್ವೇಷ, ಅಸೂಯೆ, ಅಶಾಂತಿ, ಜಾತಿ, ಧರ್ಮಗಳನ್ನು ಬಿತ್ತುವ ಮೂಲಕ ಅಧಿಕಾರ ಗಟ್ಟಿಗೊಳಿಸಿಕೊಳ್ಳುವುದೇ ಈ ಸರ್ಕಾರದ ಪ್ರಮುಖ ಉದ್ದೇಶವಿದ್ದಂತೆ ಕಾಣುತ್ತಿದೆ. ಇದರ ಬಗ್ಗೆ ನಾಡಿನ ಜನತೆ ಎಚ್ಚರ ವಹಿಸಬೇಕು. ಪಠ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರೀತಿ, ಕರುಣೆ, ದಯೆ, ಪರೋಪಕಾರ, ಸ್ನೇಹ, ಸೌಹಾರ್ದ, ಸಾಮಾಜಿಕ ಕಳಕಳಿ ಮೌಲ್ಯಾಧಾರಿತ ವಿಷಯಗಳನ್ನು ಜೋಡಣೆ ಮಾಡಬೇಕು. ಇದರಿಂದ ಮಾತ್ರ ಯಾವುದೇ ನಾಡಿನಲ್ಲಿ, ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ’ ಎಂದಿದ್ದಾರೆ.