<p><strong>ಮೈಸೂರು</strong>: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು 2020ರ ಹಿಂಗಾರು-ಬೇಸಿಗೆ ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ, ಜಿಲ್ಲೆಯ ವ್ಯಾಪ್ತಿಯಲ್ಲಿ 10 ಬೆಳೆಗಳನ್ನು ಬೆಳೆ ವಿಮೆಗೆ ಒಳಪಡಿಸಿ ಅಧಿಸೂಚನೆ ಹೊರಡಿಸಿದೆ.</p>.<p>ಹಿಂಗಾರು ಹಂಗಾಮಿಗೆ ಮಳೆಯಾಶ್ರಿತದ ಐದು ಬೆಳೆಗಳು, ನೀರಾವರಿಯ 2 ಬೆಳೆಗಳು, 1 ತರಕಾರಿ ಬೆಳೆ ಹಾಗೂ ಬೇಸಿಗೆ ಹಂಗಾಮಿನ 2 ನೀರಾವರಿ ಬೆಳೆಗಳಿಗೆ ವಿಮಾ ಯೋಜನೆ ಅಳವಡಿಸಿದೆ.</p>.<p>ರೈತರು ಆಹಾರ ಧಾನ್ಯದ ಬೆಳೆಗಳಿಗೆ ವಿಮಾ ಮೊತ್ತದ ಶೇ 1.5ರಷ್ಟು ಹಾಗೂ ತೋಟಗಾರಿಕೆ ಬೆಳೆಗಳಿಗೆ ಶೇ 5ರಷ್ಟು ವಿಮಾ ಕಂತು ಪಾವತಿಸಬೇಕಿದೆ.</p>.<p>ರೈತರು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಲು ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ (ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಪ್ರತಿ) ತಮ್ಮ ಸಮೀಪದ ಬ್ಯಾಂಕ್ ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳಿಗೆ ತೆರಳಿ ನಿರ್ದಿಷ್ಟ ವಿಮಾ ಕಂತನ್ನು ಪಾವತಿಸಬಹುದಾಗಿದೆ.</p>.<p>ಹಿಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತವಾಗಿ ಬೆಳೆದ ಕಡಲೆ, ಹುರುಳಿ, ರಾಗಿ, ಟೊಮೆಟೊ ಬೆಳೆಗಳಿಗೆ ವಿಮಾ ಮೊತ್ತ ಪಾವತಿಸಲು ನ.30ರಂದು ಕೊನೆ ದಿನ.</p>.<p>ನೀರಾವರಿಯಲ್ಲಿ ಬೆಳೆದ ಜೋಳ, ಮುಸುಕಿನಜೋಳ, ರಾಗಿ ಬೆಳೆಗಳಿಗೆ ವಿಮಾ ಮೊತ್ತ ಪಾವತಿಸಲು ಡಿ.16 ಕೊನೆ ದಿನ. ಬೇಸಿಗೆ ಹಂಗಾಮಿನಲ್ಲಿ ನೀರಾವರಿಯಲ್ಲಿ ಬೆಳೆದ ಭತ್ತ, ರಾಗಿ ಬೆಳೆಗಳಿಗೆ ವಿಮಾ ಮೊತ್ತ ಪಾವತಿಸಲು 2021ರ ಮಾರ್ಚ್ 1 ಕೊನೆ ದಿನವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು 2020ರ ಹಿಂಗಾರು-ಬೇಸಿಗೆ ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ, ಜಿಲ್ಲೆಯ ವ್ಯಾಪ್ತಿಯಲ್ಲಿ 10 ಬೆಳೆಗಳನ್ನು ಬೆಳೆ ವಿಮೆಗೆ ಒಳಪಡಿಸಿ ಅಧಿಸೂಚನೆ ಹೊರಡಿಸಿದೆ.</p>.<p>ಹಿಂಗಾರು ಹಂಗಾಮಿಗೆ ಮಳೆಯಾಶ್ರಿತದ ಐದು ಬೆಳೆಗಳು, ನೀರಾವರಿಯ 2 ಬೆಳೆಗಳು, 1 ತರಕಾರಿ ಬೆಳೆ ಹಾಗೂ ಬೇಸಿಗೆ ಹಂಗಾಮಿನ 2 ನೀರಾವರಿ ಬೆಳೆಗಳಿಗೆ ವಿಮಾ ಯೋಜನೆ ಅಳವಡಿಸಿದೆ.</p>.<p>ರೈತರು ಆಹಾರ ಧಾನ್ಯದ ಬೆಳೆಗಳಿಗೆ ವಿಮಾ ಮೊತ್ತದ ಶೇ 1.5ರಷ್ಟು ಹಾಗೂ ತೋಟಗಾರಿಕೆ ಬೆಳೆಗಳಿಗೆ ಶೇ 5ರಷ್ಟು ವಿಮಾ ಕಂತು ಪಾವತಿಸಬೇಕಿದೆ.</p>.<p>ರೈತರು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಲು ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ (ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಪ್ರತಿ) ತಮ್ಮ ಸಮೀಪದ ಬ್ಯಾಂಕ್ ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳಿಗೆ ತೆರಳಿ ನಿರ್ದಿಷ್ಟ ವಿಮಾ ಕಂತನ್ನು ಪಾವತಿಸಬಹುದಾಗಿದೆ.</p>.<p>ಹಿಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತವಾಗಿ ಬೆಳೆದ ಕಡಲೆ, ಹುರುಳಿ, ರಾಗಿ, ಟೊಮೆಟೊ ಬೆಳೆಗಳಿಗೆ ವಿಮಾ ಮೊತ್ತ ಪಾವತಿಸಲು ನ.30ರಂದು ಕೊನೆ ದಿನ.</p>.<p>ನೀರಾವರಿಯಲ್ಲಿ ಬೆಳೆದ ಜೋಳ, ಮುಸುಕಿನಜೋಳ, ರಾಗಿ ಬೆಳೆಗಳಿಗೆ ವಿಮಾ ಮೊತ್ತ ಪಾವತಿಸಲು ಡಿ.16 ಕೊನೆ ದಿನ. ಬೇಸಿಗೆ ಹಂಗಾಮಿನಲ್ಲಿ ನೀರಾವರಿಯಲ್ಲಿ ಬೆಳೆದ ಭತ್ತ, ರಾಗಿ ಬೆಳೆಗಳಿಗೆ ವಿಮಾ ಮೊತ್ತ ಪಾವತಿಸಲು 2021ರ ಮಾರ್ಚ್ 1 ಕೊನೆ ದಿನವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>