ಹಿಂದೆ ಕೆಲವು ಜಾಗ ನೀಡಲಾಗಿತ್ತಾದರೂ ಅದನ್ನು ಪಡೆದುಕೊಳ್ಳಲು ಕೆಲ ತೊಡಕು ಎದುರಾಗಿತ್ತು. ಕ್ಯಾಂಪಸ್ ಕೇಂದ್ರ ಸ್ಥಾನದ 20 ಕಿ.ಮೀ. ಅಂತರದೊಳಗೆ ಇರಬೇಕು ಎಂದು ಯುಜಿಸಿ ಹೇಳಿದೆ. ಹೀಗಾಗಿ, ಹುಣಸೂರಿನಲ್ಲಿ ನೀಡಿದ್ದ ಜಾಗವು ಮಾರ್ಗಸೂಚಿಗೆ ಹೊಂದಾಣಿಕೆಯಾಗಲಿಲ್ಲ. ಕೆಎಸ್ಒಯುನಿಂದ ಮಂಡಕಳ್ಳಿಯಲ್ಲಿ ಕಟ್ಟಡ ತೆಗೆದುಕೊಂಡಿದ್ದಾಗ ವಿದ್ಯಾರ್ಥಿಗಳು ಬರಲಿಲ್ಲ. ಸಾತಗಳ್ಳಿಯಲ್ಲಿ ಹೈಟೆನ್ಷನ್ ಮಾರ್ಗ ಹಾದು ಹೋಗಿದ್ದರಿಂದ ಹಾಗೂ ವಿವಾದ ಇದ್ದಿದ್ದರಿಂದ ಆ ಜಾಗ ಕೈಬಿಡಲಾಗಿತ್ತು.